ಶಿವಮೊಗ್ಗ : ಇಲ್ಲಿನ ಮಾಚೇನಹಳ್ಳಿ ಸಮೀಪದ ನಿಧಿಗೆ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಎಸ್ ಎಸ್ ಎಲ್ ಸಿ ಮುಗಿಸಿದ ಆಸಕ್ತ ಯುವಕ-ಯುವಕರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮೇ. ೧೫ ಕೊನೆಯ ದಿನವಾಗಿದೆ.

ತರಬೇತಿ ಕೇಂದ್ರದ ಪ್ರಾಂಶುಪಾಲರಾದ ದೀಪಕ್ ಕುಮಾರ್ ವಿ.ಆರ್. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ೧೯೭೨ ರಲ್ಲಿ ಅರಂಭಗೊAಡು ರಾಜ್ಯ ಕೌಶಲ್ಯ ಇಲಾಖೆ ಕೆಳಗಡೆ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ರಾಜ್ಯಾದ್ಯಂತ ೩೫ ಶಾಖೆಗಳನ್ನು ಹೊಂದಿದೆ. ಶಿವಮೊಗ್ಗ ನಗರದಲ್ಲಿ ೨೦೧೦ ರಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಕಾರ್ಯನಿರ್ವಹಿಸುತ್ತಾ ಬಂದಿದ್ದು, ನೂರಾರು ವಿದ್ಯಾರ್ಥಿಗಳಿಗೆ ವಿವಿಧ ಡಿಪ್ಲೋಮೋ ಕೋರ್ಸ್ಗಳ ತರಬೇತಿ ನೀಡಿ, ಅವರನ್ನು ಉದ್ಯೋಗಿಗಳನ್ನಾಗಿ ಮಾಡುವಲ್ಲಿ ಶ್ರಮಿಸಿದೆ ಎಂದರು.

ಘಟಕ ಮುಖ್ಯಸ್ಥರಾದ ನಾಗರಾಜ್ ಮಾತನಾಡಿ, ಪ್ರ್ರಸಕ್ತ ವರ್ಷ ನಮ್ಮ ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಡಿಪ್ಲೋಮಾ ಇನ್ ಮೆಕಟ್ರಾನಿಕ್ಸ್ ಎನ್ನುವ ದೀರ್ಘಾವಧಿ ಅಂದರೆ ೪ ವರ್ಷ ಅವಧಿಯ ಕೋಸ್ ð ಗಳನ್ನು ಆರಂಭಿಸಿದೆ.ಇವೆಲ್ಲವೂ ಡಿಟಿಎ ಮತ್ತು ಎಐಸಿಟಿಇ ಮಾನ್ಯತೆ ಪಡೆದಿವೆ. ಈ ಕೋಸ್ ð ಗಳಲ್ಲಿ ತರಬೇತಿ ಪಡೆದವರು ಭಾರತದ ಯಾವುದೇ ಕಂಪನಿಗಳಲ್ಲಿ ಕೆಲಸಕ್ಕೆ ಸೇರಬಹುದು ಎಂದರು.

ಬಡ ಮತ್ತು ಮಧ್ಯಮ ವರ್ಗದ ಯುವಕರು ಅನೇಕ ಕಾರಣಕ್ಕೆ ಉನ್ನತ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಒಂದು ಹಂತಕ್ಕೆ ಅರ್ಧದಲ್ಲಿಯೇ ಶಿಕ್ಷಣದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿಸುತ್ತವೆ. ಇಂತಹ ಯುವಕರಿಗೆ ಈ ಕೋಸ್ ð ಗಳು ತುಂಬಾ ಅನುಕೂಲವಾಗಲಿವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಬಹುಬೇಗ ಕೋಸ್ ð ಮುಗಿಸಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಆಸಕ್ತ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶವಾಗಿದೆ ಎಂದರು.

ಎಸ್ ಎಸ್ ಎಲ್ ಸಿ ಮುಗಿಸಿದ ಯುವಕ- ಯುವತಿಯರು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೆರಿಟ್ ಮತ್ತು ರೋಸ್ಟರ್ ಪದ್ದತಿ ಹಾಗೂ ಶೇ. ೩೦ ರಷ್ಟು ವಿದ್ಯಾರ್ಥಿನಿಯರಿಗೆ ಸೀಟು ಕಾಯ್ದಿರಿಸಲಾಗಿದೆ. ಯುವಕರಿಗೆ ಸುಸಜ್ಜಿತವಾದ ವಸತಿ ನಿಲಯವಿದೆ. ಹಾಗೆಯೇ ಶಿವಮೊಗ್ಗ ನಗರದಿಂದ ಬೆಳಗ್ಗೆ ೮.೩೦ ಕ್ಕೆ ಕಾಲೇಜಿಗೆ , ಸಂಜೆ ಶಿವಮೊಗ್ಗಕ್ಕೆ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯಿದೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಯಾವುದೇ ಮೂಲೆಯ ಆಸಕ್ತ ಯುವಕ-ಯುವತಿಯರು ಅರ್ಜಿ ಸಲ್ಲಿಸಹುದಾಗಿದೆ. ಅರ್ಹ ವಿದ್ಯಾರ್ಥಿಗಳಿಗೆ ಸಂಬAಧಪಟ್ಟ ಇಲಾಖೆಗಳಿಗೆ ತರಬೇತಿ ಶುಲ್ಕ ಹಿಂದಿರುವಿಕೆ ಮತ್ತು ಶಿಷ್ಯ ವೇತನವಿದೆ. ಐಟಿಐ ಮತ್ತು ಪಿಯುಸಿ ಮುಗಿಸಿದವರಿಗೆ ೩ನೇ ಸೆಮಿಸ್ಟರ್ ಡಿಪ್ಲೋಮಾ ಕೋಸ್ ð ಗಳಿಗೆ ನೇರ ಪ್ರವೇಶವಿದೆ.ಅರ್ಜಿ ಸಲ್ಲಿಸಲು ಮೇ. ೧೫ ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದರು. ಗೋಷ್ಟಿಯಲ್ಲಿ ಹಿರಿಯ ಉಪನ್ಯಾಸಕ ಮಂಜುನಾಥ್ ಇದ್ದರು.
…………….