ಶಿವಮೊಗ್ಗ: ಸರಳವಾಗಿ ಎಲ್ಲರಿಗೂ ಪ್ರವಾಸ ಕೈಗೆಟಕಬೇಕು ಎನ್ನುವ ಸದುದ್ಧೇಶದಿಂದ ಈಗಾಗಲೇ ಹಲವಾರು ಪ್ರವಾಸವನ್ನು ಕೈಗೊಂಡ ನಗರದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಒಂದು ದಿನದ ಮಳೆಗಾಲದ

ವಿಶೇಷ ಪ್ರವಾಸವನ್ನು ೦೬.೦೭.೨೦೨೫ ರ ಭಾನುವಾರ ಶಿವಮೊಗ್ಗದಿಂದ ಜೋಗ, ಬಂಗಾರುಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಹೊಸಗುಂದದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಮಳೆಗಾಲದ ವಿಶೇಷ ಪ್ರವಾಸವನ್ನು ಏರ್ಪಡಿಸಲಾಗಿದೆ.

ಶಿವಮೊಗ್ಗದಿಂದ ಬೆಳಿಗ್ಗೆ ೭.೩೦ ಕ್ಕೆ ಹೊರಟು ರಾತ್ರಿ ೮ ರ ಒಳಗಾಗಿ ಶಿವಮೊಗ್ಗಕ್ಕೆ ತಲುಪಲಾಗುವುದು. ಬಸ್ ಚಾರ್ಜ್ ಮತ್ತು ಬೆಳಗಿನ

ಉಪಹಾರ ಸೇರಿ ಶುಲ್ಕ ಒಬ್ಬರಿಗೆ ರೂ ೪೫೦.೦೦ ಮಾತ್ರ. ೪೫ ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ಎನ್.ಎಸ್.ರವೀಂದ್ರ ದೂರವಾಣಿ ೯೯೧೬೯೨೯೨೨೦ ಇವರ ಬಳಿ
ನೋಂದಾಯಿಸುವoತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.