ಶಿವಮೊಗ್ಗ, ಏಪ್ರಿಲ್ 19; ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳAದು 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆ ಗ್ರಾಮದ ನಾಗರಾಜ ಟಿ. ಎಂಬುವವರ ತಮ್ಮ ಟಿ.ಡಿ. ಜಯಪ್ರಕಾಶ್ ಬಿನ್ ದೇವಪ್ಪ ನಾಯ್ಕ ಎಂಬ 48 ವರ್ಷದ ವ್ಯಕ್ತಿ ದಿ: 15/03/2010 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಕೊಂಕಣಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.


ತೀರ್ಥಹಳ್ಳಿ ತಾಲೂಕಿನ ಅಕ್ಲಾಪುರ ಗ್ರಾಮದ ರೇಖಾ ಎಂಬುವವರ ಪತಿ ರಾಘು ಶೆಟ್ಟಿಗಾರ್ ಬಿನ್ ಬಗ್ರು ಶೆಟ್ಟಿಗಾರ್ ಎಂಬ 30 ವರ್ಷದ ವ್ಯಕ್ತಿ 2024ರ ಜುಲೈನಲ್ಲಿ ಮನೆಯಿಂದ ಬೈಕ್ ರಿಪೇರಿ ಮಾಡಿಕೊಂಡು ಬರುತ್ತೇನೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕಾಲಿನಲ್ಲಿ ಸುಟ್ಟ ಗಾಯದ ಕಲೆ ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ.

ತೀರ್ಥಹಳ್ಳಿ ತಾಲೂಕಿನ ಯಡೆಹಳ್ಳಿಕೇರೆ ಗ್ರಾಮದ ಶಮೀನಾ ಬಾನು ಎಂಬುವವರ ಪತಿ ಅಕ್ರಮ್ ಬಾಷಾ ಬಿನ್ ಬಾಷಾ ಸಾಬ್ ಎಂಬ 38 ವರ್ಷದ ವ್ಯಕ್ತಿ ದಿ:07/02/2025 ರಂದು ಮನೆಯಿಂದ ಗ್ಯಾರೇಜ್ ಕೆಲಕ್ಕೆಂದು ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈತನ ಚಹರೆ 5.8 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ.

ಈ ವ್ಯಕ್ತಿಗಳ ಕುರಿತು ಮಾಹಿತಿ ಇದ್ದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ದೂ.ಸಂ.:08181-228333 ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ದೂ.ಸಂ.: 9480803352 ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.