![IMG-20220927-WA0040](https://tungataranga.com/wp-content/uploads/2022/09/IMG-20220927-WA0040.jpg)
ಶಿವಮೊಗ್ಗ: ಕರಾಟೆ ಒಳ್ಳೆಯ ಆರೋಗ್ಯ, ಒಳ್ಳೆಯ ಬದುಕು ಮತ್ತು ಜೀವನಕ್ಕೆ ದಾರಿದೀಪವಾಗುವಂತ ಕ್ರೀಡೆ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
![](http://tungataranga.com/wp-content/uploads/2022/09/8-scaled.jpg)
ಅವರು ಇಂದು ನಗರದ ಅಗಮುಡಿ ಕನ್ವೆನ್ಷನ್ ಹಾಲ್ ನಲ್ಲಿ ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಅಂಗವಾಗಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ -2022 ಉದ್ಘಾಟಿಸಿ ಮಾತನಾಡಿದರು.
![](http://tungataranga.com/wp-content/uploads/2022/09/5-scaled.jpg)
ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಹಿಂದೆ ರಾಜ ಮಹಾರಾಜರ ಕಾಲದಿಂದಲೂ ಅಂಗರಕ್ಷಕ ಪಡೆಗಳಿಗೆ ಕರಾಟೆಯಂತಹ ತರಬೇತಿ ನೀಡಲಾಗುತ್ತಿತ್ತು. ದೈಹಿಕ, ಮಾನಸಿಕ ಸದೃಢತೆಗೆ ಈ ಕ್ರೀಡೆ ಅತ್ಯುತ್ತಮವಾಗಿದ್ದು, ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ ಎಂದರು.
![](http://tungataranga.com/wp-content/uploads/2022/09/Shivamogga-1.jpg)
ಸ್ಪರ್ಧಾ ಕಣದಲ್ಲಿ ಆರೋಗ್ಯಕರ ಪೈಪೋಟಿ ನಡೆಯಲಿ. ಇಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಲಿ. ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಿ. ಕರಾಟೆ ಎಂದಾಕ್ಷಣ ಶಿವಮೊಗ್ಗ ವಿನೋದ್ ಜ್ಞಾಪಕಕ್ಕೆ ಬರುತ್ತಾರೆ. ಸುಮಾರು 8 ಜಿಲ್ಲೆಗಳಿಂದ ಈ ಪಂದ್ಯಾವಳಿಗೆ ಕ್ರೀಡಾಪಟುಗಳು ಆಗಮಿಸಿದ್ದು, ಈ ರೀತಿಯ ಕರಾಟೆ ಪಂದ್ಯಾವಳಿಗಳನ್ನು ವಿನೋದ್ ಅವರು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಮಹಾನಗರ ಪಾಲಿಕೆ ಮಕ್ಕಳ ದಸರಾ ಸಂದರ್ಭದಲ್ಲಿ ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
![](http://tungataranga.com/wp-content/uploads/2022/09/2-scaled.jpg)
ಈ ಸಂದರ್ಭದಲ್ಲಿ ಮಕ್ಕಳ ದಸರಾ ಸಮಿತಿ ಅಧ್ಯಕ್ಷೆ ಲತಾ ಗಣೇಶ್, ಮೇಯರ್ ಸುನಿತಾ ಅಣ್ಣಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಯು.ಹೆಚ್. ವಿಶ್ವನಾಥ್, ಕಲ್ಪನಾ ರಾಮು, ಜ್ಞಾನೇಶ್ವರ್, ಪ್ರಭು, ವಿನೋದ್, ಅಲ್ತಾಫ್ ಪಾಷಾ, ಸೈಯದ್ ರಿಝಾ, ದಿವಾಕರ್, ಕೃಷ್ಣಮೂರ್ತಿ, ಲೋಕೇಶ್, ರತ್ನಾಕರ್ ಮೊದಲಾದವರಿದ್ದರು.