ಶಿವಮೊಗ್ಗ : ಜನಸಾಗರದ ನಡುವೆ, ಹಿಂದೂಮಹಾಸಭಾ ಗಣಪನ ಮೆರವಣಿಗೆ ರಾಜ ಗಾಂಭೀರ್ಯದಿಂದ ಸಾಗುತ್ತಿದ್ದು, ಮೆರವಣಿಯ ಆರಂಭದಿಂದಲೇ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ. ವಿವಿಧ ವಾದ್ಯಗಳಿಗೆ ಹೆಜ್ಜೆ ಹಾಕುತ್ತಿದ್ದು,
ಚಂಡೆ, ಡೊಳ್ಳು, ತಮಟೆ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಯಲ್ಲಿದ್ದು, ಇವುಗಳಿಗೆ ಯುವಕ, ಯುವತಿಯರು ಭರ್ಜರಿ ಸ್ಟೆಪ್ ಹಾಕುತ್ತಿದ್ದಾರೆ.

ಹುಲಿ ಕುಣಿತಕ್ಕೆ ಜನರ ಫಿದಾ ಆದರು. ಹುಲಿ ವೇಷಧಾರಿಗಳ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಿದರು.
ಜೊತೆಗೆ ಗಣಪನನ್ನು ನೋಡಲು ಜಿಲ್ಲೆ ಸೇರಿದಂತೆ ಹಲವು ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.