
ಶಿವಮೊಗ್ಗ,ಮಾ.27: ನಗರದಲ್ಲಿ ಇದೇ ಮೊದಲ ಬಾರಿಗೆ ಫನ್ ವಲ್ರ್ಡ್ ನಿಂದ ಹಮ್ಮಿಕೊಳ್ಳಲಾದ ಅಪರೂಪದ ಎಕ್ಸಿಬಿಷನ್ ಶಿವಮೊಗ್ಗ ಉತ್ಸವ -2025 ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಫನ್ ವಲ್ರ್ಡ್ ಸಿಇಒ ಮಾಸ್ತಿ ಚೈತನ್ಯ ಅಯ್ಯಂಗಾರ್ ಮಾತನಾಡಿ ದೇಶದಲ್ಲೇ ಅತಿ ದೊಡ್ಡ ಎಕ್ಸಿಬಿಷನ್ ಇಂಡಿಯಾ ಸಂಸ್ಥೆ ನಮ್ಮದು ಏಕಕಾಲದಲ್ಲಿ ಪ್ರಸ್ತುತ 22 ಕಡೆ ಈ ರೀತಿಯ ಎಕ್ಸಿಬಿಷನ್ ನಡೆಯುತ್ತಿದೆ. ಎಲ್ಲಾ ಕಡೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಈ ವಸ್ತು ಪ್ರದರ್ಶನದಲ್ಲಿ ನೂರಾರು ಜಾತಿಯ ವಿಶೇಷ ತಳಿಯ ಮೀನುಗಳ ಅಕ್ವೇರಿಯಂ ನೋಡಬಹುದು ಅಲ್ಲದೆ ವಿಶೇಷ ಆಕರ್ಷಣೆಯಾಗಿ ಫಿಲಿಫೈನ್ಸ್ ದೇಶದ ಮತ್ಸ್ಯ ಕನ್ಯೆಯರು ಇರುತ್ತಾರೆ. ಶಿವಮೊಗ್ಗದಲ್ಲಿ ಪ್ರದರ್ಶನ 45 ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಸಂಜೆ 4 ರಿಂದ 9 ಗಂಟೆಯವರೆಗೆ ಇರಲಿದ್ದು ಮಕ್ಕಳಿಗೆ ಆಟ ಆಡಲು ವಿಶೇಷ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ. ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸುನಾಮಿ ಮತ್ತು ಗ್ರೀನ್ ಟವರ್ ಅಮ್ಯೂಸ್ಮೆಂಟ್ ಇದ್ದು ವಿಶೇಷ ವಸ್ತು ಪ್ರದರ್ಶನ. ವಿವಿಧ ಆಹಾರದ ಮಳಿಗೆಗಳು ಮಕ್ಕಳಿಗೆ ಖುಷಿ ಕೊಡುವ ವೈವಿಧ್ಯಮಯ ಎಕ್ಸಿಬಿಷನ್ ಇದಾಗಿದೆ ಎಂದರು.

ಪ್ರವೇಶದರ 100 ರೂ ನಿಗದಿಪಡಿಸಲಾಗಿದೆ. ಬೇಸಿಗೆಯ ಕಾಣದಿಂದಾಗಿ ಸಂಜೆ 4 ರಿಂದ ಪ್ರದರ್ಶನ ಆರಂಭಗೊಳ್ಳಲಿದೆ ಎಂದರು. ಶಿವಮೊಗ್ಗದ ಜನರಿಗಾಗಿ ಬಂದಿದ್ದೇವೆ. ದೇಶ ವಿದೇಶಗಳಲ್ಲಿ ಹೆಸರಾಂತ ಎಕ್ಸಿಬಿಷನ್ ಇದು. ಮಿಸ್ ಮಾಡದೆ ಶಿವಮೊಗ್ಗದಲ್ಲಿ ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ ಎಂದರು. ಮೈಸೂರು ದಸರಾ ಸೇರಿದಂತೆ ದೇಶದ ಪ್ರತಿಷ್ಠಿತ ಕಡೆಗಳಲ್ಲಿ ಯಶಸ್ವಿಯಾಗಿ ನಮ್ಮ ಸಂಸ್ಥೆವತಿಯಿಂದ ಎಕ್ಸಿಬಿಷನ್ ನಡೆಸಿದ್ದೇವೆ ಶಿವಮೊಗ್ಗದ ಜನತೆಯ ಸಹಕಾರವಿರಲಿ ಎಂದರು.

ಉದ್ಘಾಟಿಸಿ ಮಾತನಾಡಿದ ಕೆ ಎಸ್ ಈಶ್ವರಪ್ಪನವರು ಈ ಸಂಸ್ಥೆಯವರು ಶಿವಮೊಗ್ಗಕ್ಕೆ ಮೊದಲ ಬಾರಿಗೆ ಬಂದು ಈ ಎಕ್ಸಿಬಿಷನ್ ನಡೆಸುತ್ತಿರುವುದು ಸಂತೋಷ ತಂದಿದೆ. ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ವೈವಿಧ್ಯಮಯ ಮೀನುಗಳ ಅಕ್ವೇರಿಯಂ ಹಾಗೂ ವಿಶೇಷ ಆಕರ್ಷಣೆಗಳು ಮಕ್ಕಳಿಗೆ ಮುಧ ನೀಡುವುದರ ಜೊತೆಗೆ ಜ್ಞಾನ ಕೂಡ ಹೆಚ್ಚಿಸುತ್ತದೆ. ಆಹಾರದ ಮಳಿಗೆಗಳು ಮತ್ತು ವಸ್ತು ಪ್ರದರ್ಶನ ಮಕ್ಕಳಿಗೆ ರಜಾ ಕಾಲದಲ್ಲಿ ಅನುಕೂಲವಾಗಲಿದೆ ಎಂದರು ಹಾಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.