ಸುದ್ದಿ, ಮತ್ತು ಜಾಹೀ944825683183
ಶಿವಮೊಗ್ಗ, ಮಾ.29:

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಕಾಲ ಕ್ಷಣಿಕವಾಗಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜಿಲ್ಲಾ ಪ್ರವಾಸವನ್ನು ರದ್ದುಗೊಳಿಸಲಾಗಿದ್ದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾಜ್ಯದ 224 ವಿಧಾನಸಭಾ ಚುನಾವಣೆಗೆ ಹಿಂದುಗಳಿಗೆ 11:30ಕ್ಕೆ ದೆಹಲಿಯಲ್ಲಿ ದಿನಾಂಕ ಹಾಗೂ ಸಮಗ್ರ ವಿವರ ಪ್ರಕಟವಾಗಲಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಮಿತಿ ಜಾರಿಯಾಗುವ ಎಲ್ಲ ಸಾಧ್ಯತೆಗಳು ನಿಚ್ವಳವಾಗಿವೆ. ಒಂದೇ ಹಂತದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದ್ದು ದಿನಾಂಕ ಘೋಷಣೆ ಬಳಿಕ ಇಂದಿನಿಂದಲೇ ನೀತಿ ಸಮಿತಿ ಜಾರಿಯಾಗಲಿದೆ.
ಈ ಸಂದರ್ಭದಲ್ಲಿ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆ ನಡೆಸುವಂತಿಲ್ಲ. ಹಾಗೆಯೇ ಚುನಾವಣಾ ಅಧಿಕಾರಿಗಳ ಸಭೆಯನ್ನು ಕರೆಯುವಂತಿಲ್ಲ. ಯಾರೂ ಧರ್ಮ ಜಾತಿ ಆಧಾರದಲ್ಲಿ ಮತ ಕೇಳುವಂತಿಲ್ಲ. ಸರ್ಕಾರಿ ವಾಹನಗಳನ್ನು ಮುಖ್ಯಮಂತ್ರಿಗಳು ಹಾಗೂ ಸಚಿವರು ಬಳಸುವಂತಿಲ್ಲ ಸೇರಿದಂತೆ ವಿವಿಧ ನೀತಿಗಳು ಜಾರಿಯಾಗಲಿವೆ.

ಎರಡನೇ ವಾರದಲ್ಲಿ ಚುನಾವಣೆ ನಡೆಯಬಹುದು ಎಂದು ಹೇಳಲಾಗುತ್ತಿದೆ.