
ಸುದ್ದಿ, ಮತ್ತು ಜಾಹೀ944825683183
ಭದ್ರಾವತಿ,ಮಾ.03:
ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಭದ್ರಾವತಿ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿದೆ.

ಸುದ್ದಿಯ ಸಮಗ್ರ ವಿವರ:
ದಿನಾಂಕಃ- 27-09-2020 ರಂದು ಶ್ರೀ ಮಂಜುನಾಥ್ ಈ.ಓ ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತ ರವರಿಗೆ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲೆಕಟ್ಟೆ ಹೆಲಿಪ್ಯಾಡ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಆರೋಪಿತರಾದ ಇಮ್ರಾನ್ ಪಾಷಾ ಮತ್ತು ಸೈಯದ್ ರೋಷನ್ ರವರನ್ನು ವಶಕ್ಕೆ ಪಡೆದು ಆರೋಪಿತರಿಂದ ಅಂದಾಜು ಮೌಲ್ಯ 6,000/- ರೂಗಳ 190 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಗುನ್ನೆ ಸಂಖ್ಯೆ 0118/2020 ಕಲಂ 20(b) (ii) (A), 8C NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪ್ರಕರಣದ ತನಿಖಾಧಿಕಾರಿಗಳಾದ ಕು|| ಶಿಲ್ಪಾ ನಾಯನೇಗಲಿ ಪಿ.ಎಸ್.ಐ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ ರವರು* ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀ ಬಿ ಹೆಚ್ ರಂಗಪ್ಪ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, ಪ್ರಧಾನ ಸಿ ಜೆ & ಜೆ ಎಂ ಎಫ್ ಸಿ ನ್ಯಾಯಾಲಯ ಭದ್ರಾವತಿದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀ ಯತೀಶ್. ಆರ್ ರವರು ದಿನಾಂಕಃ- 02-03-2023 ರಂದು *ಆರೋಪಿತರಾದ 1) ಇಮ್ರಾನ್ ಪಾಷಾ, 22 ವರ್ಷ, ಬೊಮ್ಮನಕಟ್ಟೆ ಭದ್ರಾವತಿ, 2) ಸೈಯದ್ ರೋಷನ್, 38 ವರ್ಷ, ಬೊಮ್ಮನಕಟ್ಟೆ ಭದ್ರಾವತಿ ರವರ ವಿರುದ್ಧ ಕಲಂ 20(b) (ii) (A) NDPS ಕಾಯ್ದೆ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 06 ತಿಂಗಳುಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 10,000/- ರೂ ದಂಡ ವಿಧಿಸಿ ಆದೇಶ ನೀಡಿರುತ್ತಾರೆ.
