ಕಾಲ್ಪನಿಕ ಚಿತ್ರ

ಭರ್ಜರಿ ಪೌಷ್ಟಿಕ ಆಹಾರ ಯೋಜನೆ ಎಲ್ಲಿ?
ಹೇಗೆ ನೋಡಿ
ಕೃಪೆ- ಕನ್ನಡಪ್ರಭ
ಚೆನ್ನೈ (ತಮಿಳುನಾಡು):
ಸರ್ಕಾರಿ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ನೀಡುವುದು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ದೊಡ್ಡ ಆಸೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಸಚಿವ ಎ. ರಾಜ್ ಮೋಹನ್ ಅವರು ಈ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದು, “ಜೈಲಿನ ಕೈದಿಗಳಿಗೂ ಸಹ ಚಿಕನ್ ಬಿರಿಯಾನಿ ನೀಡಲಾಗುತ್ತದೆ, ಹಾಗಿರುವಾಗ ದೇಶದ ಭವಿಷ್ಯವಾಗಿರುವ ಮತ್ತು ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಅದನ್ನು ನೀಡಲು ಸಾಧ್ಯವಿಲ್ಲವೇ?” ಎಂದು ರಾಜ್ ಮೋಹನ್ ಪ್ರಶ್ನಿಸಿದ್ದಾರೆ.




ಮುಂದುವರೆದು, ಯೋಜನೆಯನ್ನು ಇಡೀ ರಾಜ್ಯಾದ್ಯಂತ ಜಾರಿಗೊಳಿಸುವ ಮುನ್ನ ಪ್ರಾಯೋಗಿಕವಾಗಿ ಕೆಲವು ಶಾಲೆಗಳಲ್ಲಿ ಪರೀಕ್ಷಿಸಲಾಗುತ್ತದೆ. ಹಾಗಾಗಿಯೇ, ಕೋಳಿ ಮಾಂಸವನ್ನು ಅತ್ಯಂತ ಸುವ್ಯವಸ್ಥಿತವಾಗಿ ಮತ್ತು ಶುಚಿಯಾಗಿ ಬೇಯಿಸಿ ಮಕ್ಕಳಿಗೆ ಉಣಬಡಿಸಲು ಅಗತ್ಯವಿರುವ ಸಿದ್ಧತೆಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಮತ್ತೊಂದೆಡೆ, ಮಾಂಸಾಹಾರ ಸೇವಿಸದ ಅಥವಾ ಸಸ್ಯಹಾರಿ ಆಹಾರ ಇಷ್ಟಪಡುವ ವಿದ್ಯಾರ್ಥಿಗಳಿಗೆ ಎಂದಿನಂತೆ ಪೌಷ್ಟಿಕ ಸಸ್ಯಹಾರಿ ಊಟದ ವ್ಯವಸ್ಥೆ ಮುಂದುವರಿಯುತ್ತದೆ. ಮಾಂಸಾಹಾರಿ ಮಕ್ಕಳಿಗೆ ಮಾತ್ರ ಚಿಕನ್ ಬಿರಿಯಾನಿ ಆಯ್ಕೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.

ಏತನ್ಮಧ್ಯೆ, ತಮಿಳುನಾಡು ಸರ್ಕಾರವು ಈಗಾಗಲೇ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ಯೋಜನೆಯನ್ನು ಯಶಸ್ವಿಯಾಗಿ ವಿಸ್ತರಿಸಿದ್ದು, ಅದರ ಬೆನ್ನಲ್ಲೇ ಈ ಬಿರಿಯಾನಿ ಭಾಗ್ಯದ ಹೊಸ ಪ್ಲಾನ್ ಭಾರೀ ಚರ್ಚೆಗೆ ಮತ್ತು ಗಮನ ಸೆಳೆಯಲು ಕಾರಣವಾಗಿದೆ. ಆದರೆ, ಕರ್ನಾಟಕ ಸೇರಿದಂತೆ ಇತರ ಯಾವುದೇ ರಾಜ್ಯಗಳಲ್ಲಿ ಸದ್ಯಕ್ಕೆ ಇಂತಹ ಪ್ರಸ್ತಾವನೆ ಜಾರಿಯಲ್ಲಿಲ್ಲ.