ಶಿವಮೊಗ್ಗ, ಫೆಬ್ರವರಿ 15:
ಶಿವಮೊಗ್ಗ ನಗರದ ಹರಕೆರೆಯ ಶಿವ ದೇವಾಲಯದ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದ 11 ವರ್ಷದ ಬಾಲಕಿಯನ್ನು ಪೊಲೀಸ್ ಇಲಾಖೆಯ ‘ಅಕ್ಕ ಪಡೆ’ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಫೆಬ್ರವರಿ 15 ರ ಇಂದು ನಡೆದಿದೆ.
ಸದರಿ ಬಾಲಕಿಯು ದೇವಾಲಯದ ಸುತ್ತಮುತ್ತ ಭಿಕ್ಷಾಟನೆಯಲ್ಲಿ ತೊಡಗಿದ್ದು, ಅಲ್ಲಿಯೇ ಕರ್ತವ್ಯದಲ್ಲಿದ್ದ ಅಕ್ಕ ಪಡೆ ಸಿಬ್ಬಂದಿಗಳಾದ ನಿರ್ಮಲ ಹಾಗೂ ವಿಜಯ ಅವರು ಗಮನಿಸಿ, ಬಾಲಕಿಯ ಪೂರ್ವಾಪರ ವಿಚಾರಣೆ ನಡೆಸಿದ್ದಾರೆ.

ನಂತರ ಬಾಲಕಿಯನ್ನು ನಗರದ ಹೊರವಲಯ ಆಲ್ಕೊಳದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ. ಅಕ್ಕ ಪಡೆ ಸಿಬ್ಬಂದಿಗಳ ಉತ್ತಮ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ.
