ಶಿವಮೊಗ್ಗ.25 : ಜಿಲ್ಲೆಯಲ್ಲಿ ಓಸಿ, ಡ್ರಗ್ಸ್ ಹಾಗೂ ಗ್ರಾಮೀಣ ಭಾಗದಲ್ಲಿ ಹೆಂಡ, ಸಾರಾಯಿ ಮಾರಾಟ ಹೆಚ್ಚಾಗಿ ನಡೆಯುತ್ತಿದ್ದು, ಕೂಡಲೇ ಇದನ್ನು ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ ಪೊಲೀಸರಿಗೆ ಸೂಚಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿ.ಪಂನಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ನಾನು ಐಬಿ ಯಲ್ಲಿ ಇದ್ದಾಗ ಅನೇಕ ಗ್ರಾಮೀಣ ಮಹಿಳೆಯರು ಬಂದು ನನ್ನ ಭೇಟಿ ಮಾಡಿ ಡ್ರಗ್ಸ್ ಮತ್ತು ಹೆಂಡ, ಸಾರಾಯಿ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ಮನೆಯ ಮಕ್ಕಳು ಬದುಕು ಹಾಳಾಗುತ್ತಿದೆ ಇದನ್ನು ತಡೆಗಟ್ಟಬೇಕೆಂದು ಮನವಿ ಮಾಡಿದ್ದಾರೆ.
ಇದರ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ನಿಗಾ ವಹಿಸಬೇಕು.
ಡ್ರಗ್ಸ್ ನಿಂದ ಯುವ ಮನಸ್ಸುಗಳು ಬದುಕು ನಾಶವಾಗುತ್ತದೆ. ಇಂತಹದಕ್ಕೂ ನಾವು ಅವಕಾಶ ಕೊಡಬಾರದು. ಶಿವಮೊಗ್ಗವನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು .