
ಅರವತ್ತು ವರ್ಷದ. ಹಿಂದಿನ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನಾನು ಸಿದ್ದನಿದ್ದೇನೆ. ಆದರೆ ನನಗೆ ಬೇಸರವಾಗುತ್ತಿರುವುದೇನು ಎಂದರೆ ಒಂದೇ ವಿಷಯವನ್ನ ಎಷ್ಟು ವರ್ಷದವರೆಗೆ ಲಾಭ ಪಡೆಯುತ್ತೀರಿ ಎಂದು ಕಾಂಗ್ರೆಸ್ ಹೆಸರು ಹೇಳದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಅವರು ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ನೂತನ ಕಚೇರಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿ, 24 ಸಾವಿರ ಎಕರೆ ಭೂಮಿಯ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಜೊತೆಗೆ 9 ಸಾವಿರ ಎಕರೆ ಭೂಮಿಯ ಸಮಸ್ಯೆಯನ್ನ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಮೂರನೇ ವಾರದಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡಲು ಸೂಚಿಸಿದ್ದೇನೆ. ಹೈಕೋರ್ಟ್ ಆದೇಶದ ಪ್ರಕಾರ 9 ಸಾವಿರ ಎಕರೆ ಭೂಮಿಯ ಡಿನೋಡಿಫಿಕೇಶನ್ ಗೆ ಕೇಂದ್ರದ ಅನುಮತಿ ಪಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.


ಮಲೆನಾಡಿನ ಸಮಗ್ರ ಸಮಸ್ಯೆ ಬಗೆಹರಿಸಲು ಬಿಎಸ್ ವೈ ನನಗೆ ತಿಳಿಸಿದ್ದಾರೆ. ಬಿಎಸ್ ವೈ ಹೇಳಿದಂತೆ ಮಲೆನಾಡಿನ ಅರಣ್ಯ ರೈತರ ಸಮಸ್ಯೆ ಬಗೆಹರಿಸಲು ನಾನು ಬದ್ಧನಾಗಿದ್ದೇನೆ. ಆದರೆ 60 ವರ್ಷದ ವರೆಗೆ ಸಮಸ್ಯೆ ಬಗೆಹರಿಸಲು ಶ್ರಮಿಸದೆ ಪಾದಯಾತ್ರೆ ಹೊರಟಿರುವುದು ಬೇಸರದ ಸಂಗತಿ ಎಂದರು.
ಮಲೆನಾಡಿನ ಭಾಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿಕೊಂಡು ಎಷ್ಟು ವರ್ಷದ ವರೆಗೆ ಲಾಭ ಪಡೆಯುತ್ತಾರೆ ಎಂದು ಕಾಂಗ್ರೆಸ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದರು .
