
ಶಿವಮೊಗ್ಗ,ನ.24:


ಶ್ರದ್ದೆ, ವಿನಯ, ಸೃಜನಶೀಲತೆಯ ಜೊತೆಗೆ ಭಕ್ತಿಯನ್ನು ರೂಢಿಸಿಕೊಂಡಾಗ ಎಂತಹ ಸಾಧನೆಯನ್ನಾದರೂ ಮಾಡಬಹುದು. ಆ ಮೂಲಕ ಯಶಸ್ಸುಗಳಿಸಬಹುದು ಎಂದು ಕಲ್ಲುಗಂಗೂರಿನ ಶ್ರೀ.ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ.ವಿನಯಾನಂದ ಸರಸ್ವತಿ ಮಹರಾಜ್ ತಿಳಿಸಿದರು.

ಅವರು ಇಂದು ಮದ್ಯಾಹ್ನ ಗೋಪಾಲ ಗೌಡ ಬಡಾವಣೆಯ ಶ್ರೀ. ರಾಮಕೃಷ್ಣ ವಿದ್ಯಾನಿಕೇತನ ವಸತಿ ವಿದ್ಯಾಲಯವು ಇಂದಿನಿಂದ ಎರಡು ದಿನಗಳ ಕಾಲ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ ಶಾಲಾ ವಾರ್ಷಿಕೋತ್ಸವ, ಹಾಗೂ ಚಿನ್ನದ ಮಗುವಿಗೆ ಅಂದದ ಕೊಡುಗೆ, ಚಿನ್ನರ ಚಿಲುಮೆ ಹಾಗೂ ರಂಗೋತ್ಸೋವದ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು.
ಅಭ್ಯಾಸ ಮತ್ತು ವೈರಾಗ್ಯ ಜೀವನದ ಅತಿಮುಖ್ಯ ಅಂಶಗಳು ನಿರಂತರ ಅಭ್ಯಾಸ ದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಬೇಡವಾದದ್ದನ್ನು ವೈರಾಗ್ಯ ಮಾಡಿದಾಗ ಎಂತಹ ಸಾಧನೆಯನ್ನಾದರೂ ಮಾಡಬ ಹುದು. ನಮ್ಮ ಸಾಧನೆ ಹಾಗೂ ಯಶಸ್ಸಿಗೆ ಪೂರಕವಾಗಿ ಭಕ್ತಿ ಇರಬೇಕು. ದೇವರ ಕೃಪೆ ಇರಬೇಕು ಎಂದು ಹೇಳಿದರು.

ವಿಶೇಷವಾಗಿ ಇಂದು ಬೆಳಗಿನ ಕಾರ್ಯಕ್ರಮದಿಂದ ೨೦೧೯-೨೦ ಹಾಗೂ ೨೦೨೦ ೨೧ರ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಮಕ್ಕಳಿಗೆ ನಗದು ಬಹುಮಾನದ ಮೂಲಕ ಅವಾರ್ಡ್ ನೀಡಲಾಯಿತು.

ರಾಮಕೃಷ್ಣ ಮೆರಿಟ್ ಅವಾರ್ಡ್, ದಾವಣೆಬೈಲು ಶ್ರೀಮತಿ ಭಾಗಿರಥಮ್ಮ ಅವಾರ್ಡ್, ವೆಂಕಟರಮಣ ಅವಾರ್ಡ್, ಜ್ಯೋತಿ ಎಸ್ ರಾವ್ ಅವಾರ್ಡ್, ಡೊಂಗ್ರೆ ಮೆರಿಟ್ ಅವಾರ್ಡ್, ಸೈಯದ್ ಹುಸೇನ್ ಅವಾರ್ಡ್, ಸಣ್ಣಗೌಡ್ರು ಗಂಗಾಧರಪ್ಪ ಅವಾರ್ಡ್, ಮಾತೃಭೂಮಿ ಅವಾರ್ಡ್, ಹತ್ವಾರ್ ಅವಾರ್ಡ್, ನೆಪ್ಚೂನ್ ಮೆರಿಟ್ ಅವಾರ್ಡ್, ಸರೋಜಮ್ಮ ಮೆರಿಟ್ ಅವಾರ್ಡ್, ಶಾರದಾ ಮೆರಿಟ್ ಅವಾರ್ಡ್, ಸೀತಾರಾಮ್ ಭಟ್ ಸ್ಮರಣಾರ್ಥ ಅವಾರ್ಡ್, ಶಾರದಮ್ಮ ಸುಬ್ರಾಯಭಟ್ ಅವಾರ್ಡ್, ಕು. ದಿವ್ಯ ಪಿ ಸ್ಮರಣಾರ್ಥ ಅವಾರ್ಡ್, ಬಿ ಸಂತೋಷ್ ಕುಮಾರ್ ಅವಾರ್ಡ್, ಹಾಗೂ ಕೆ.ವಿ. ಭಟ್ ಸ್ಮರಣಾರ್ಥ ಅವಾರ್ಡ್ಗಳನ್ನು ಶ್ರೀಗಳು ಹಾಗೂ ಸಂಸ್ಥೆಯ ಪದಾಧಿಕಾರಿಗಳು ನೀಡಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ವಿದ್ಯಾ ನಿಕೇತನದ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ರಾಮಕೃಷ್ಣ ವಿದ್ಯಾಸಂಸ್ಥೆ ಶಾಲೆಗಳ ಸಾಧನೆಗಳು ಹಾಗೂ ವಸತಿ ವಿದ್ಯಾಲಯಗಳ ಮಕ್ಕಳ ಸಾಧನೆಗಳ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನದ ಅರುಣ್, ತೀರ್ಥೇಶ್, ಗಜೇಂದ್ರನಾಥ್ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.


