![IMG-20220714-WA0042](https://tungataranga.com/wp-content/uploads/2022/07/IMG-20220714-WA0042.jpg)
ಶಿವಮೊಗ್ಗ,ಆ.06:
ಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭದ್ರಾ ಜಲಾಶಯದಿಂದ ನದಿಗೆ ಹೆಚ್ಚು ನೀರು ಹರಿ ಬಿಡಲಾಗಿದೆ. ಒಂದುವೇಳೆ ಮಳೆ ಹೆಚ್ಚಾದರೆ ನದಿಯ ನೀರಿನ ಪ್ರಮಾಣ ಹೆಚ್ಚಳವಾಗಲಿದ್ದು ನದಿಯ ಪಾತ್ರದ ಜನರಿಗೆ ಈಗ ಎಚ್ಚರದಿಂದ ಇರಲು ತಾಲೂಕು ಆಡಳಿತ ಸೂಚಿಸಿದೆ.
ಮುಂದಿನ ನಾಲ್ಕು ದಿನಗಳ ವರೆಗೆ ಅಧಿಕ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲೂ ಹೆಚ್ಚಿನ ನೀರನ್ನ ನದಿಗೆ ಹರಿಸುವ ಸಾಧ್ಯತೆ ಇದೆ.
ಈ ಹಿನ್ನಲೆಯಲ್ಲಿ ಭದ್ರಾವತಿ ತಾಲೂಕಿನ ತಹಶೀಲ್ದಾರ್ ತಮ್ಮ ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿ ಇರಲು ಸೂಚಿಸಿದ್ದಾರೆ ಹಾಗೂನದಿ ಪಾತ್ರದ ಜನತೆಗೆ ಎಚ್ಚರದಿಂದ ಇರಲು ಸೂಚಿಸಿದ್ದಾರೆ.
ಈಗಾಲೇ ಜಿಲ್ಲೆಯಲ್ಲಿ ಅಧಿಕ ಮಳೆ ಹೆಚ್ಚಳವಾಗುವ ಸಾದ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು ತಾಲೂಕಿನಲ್ಲಿ ರೆಡ್ ಅಲರ್ಟ್ ಘೋಷಿಸಿದೆ.